Friday, September 25, 2009

ಹಾಗೆರೀ ನಮ್ಮ ಕಾಗೇರಿ...

ರಾಜಕಾರಣಿಗಳು, 'ಗಣ್ಯ' ವ್ಯಕ್ತಿಗಳು ನುಡಿದಂತೆ ನಡೆಯುವುದು ಅಥವಾ ಸರಳವಾಗಿ ಬದುಕುವುದು ಸಾಧ್ಯವೇ ಇಲ್ಲವಾ ಅಂತ ಆಗಾಗ ಅನಿಸುತ್ತದೆ. ಆದರೆ ಹೆಚ್ಚಾಗಿ ನಮಗಾಗುವುದು ನಿರಾಸೆಯೇ. ಅಂತಹುದರಲ್ಲಿ, ಅಪರೂಪಕ್ಕೆ ಸಿಕ್ಕವರು ನಮ್ಮ ಶಿಕ್ಷಣ ಸಚಿವರಾದ ಕಾಗೇರಿ!

ಬರಿಯ ಭಾಷಣ,ಲೇಖನಗಳಲ್ಲಿ ಕನ್ನಡಾಭಿಮಾನ ಪ್ರದರ್ಶಿಸುವ ಬಹುಸಂಖ್ಯಾತರ ಮುಂದೆ ಸದ್ದಿಲ್ಲದೆ ಒಳ್ಳೆಯ ಕಾರ್ಯ ಮಾಡಿದ್ದಾರೆ.ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಕಲಿಸುತ್ತಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. 'ಕಾಲ ಕೆಟ್ಟು ಹೋಗಿದೆ' ,'ಒಳ್ಳೆಯವರಿಲ್ಲ...' ಎಂದು ಮುಂತಾಗಿ ಹೇಳುತ್ತಾ ಕೂರುವ ಬದಲು, ಇರುವ ಒಳ್ಳೆಯತನವನ್ನು ಗುರುತಿಸಬೇಕಿದೆ. ಹಾಗೆ ಮಾಡಿದರೆ ಒಳ್ಳೆಯವರಿಗೂ ಒಳ್ಳೆಯವರಾಗಿರಲು ಸ್ಫೂರ್ತಿ ಬರಬಹುದೇನೋ.

No comments: