Sunday, June 12, 2011

ಸಮಯದ ಅಭಾವ

ಬಹಳ ದಿನಗಳ ನಂತರ
ಕವನ ಬರೆಯುವ ಆಸೆಯು
ಮೊದಲಿನಂತೆ ಸ್ಫೂರ್ತಿಯಿಲ್ಲ
ಏನು ಆಗಿದೆ ಕೊರತೆಯು?

ಬೆಳಗಿನಿಂದ ಸಂಜೆವರೆಗೂ
ಕೆಲಸವದು ನಿರಂತರ
ಮನೆಗೆ ಬಂದು ಬರೆಯುವಷ್ಟು
ಸಹನೆಯಿಲ್ಲ ನಂತರ.

ಏಕತಾನತೆಯಿಂದ ಜೀವನ
ಸಾಗುತಿರಲು ನಿತ್ಯವೂ
ಮಿಕ್ಕ ಸಮಯದಿ ನಡೆಯಬೇಕಿದೆ
ನಮ್ಮ ಬಾಳಿನ ಚಕ್ರವು.

Sunday, May 8, 2011

ಪ್ರಶ್ನೆ

ನಿನ್ನೊಲುಮೆ ಪಡೆಯಲಿಕೆ
ನಿನ್ನೆದೆಯ ಗೆಲ್ಲಲಿಕೆ
ನನ್ನೆದೆಗೆ ತವಕವೇಕೆ?

ಚೆಲುವೆ

ನಗುಮುಖದ ಚೆಲುವೆ ನೀ
ಹಗುರಾಗಿ ಬಳಿ ಬಂದೆ
ಮಗುವಾದೆ ನಿನ್ನೊಲವಿಗೆ.

ಜೀವ

ಮಳೆಹನಿಯು ಸೋಕಿರಲು
ಅವಿತಿದ್ದ ಬೀಜವದು
ಮೊಳಕೆಯೊಡೆದು ಜೀವವಾಯ್ತು

Saturday, May 7, 2011

ನೋವು

ನೋವಿರುವುದು ತುಂಬಾ
ನಮ್ಮ ಎದೆಯೊಳಗೆ
ಚೀರುತಿಹುದು ನಿತ್ಯ
ಕೇಳುವವರಿಲ್ಲದೆ.

ಜೀವನವು ದಿನನಿತ್ಯ
ಹೋರಾಟದ ಹಾದಿಯು
ನೋವುಗಳು,ಗಾಯಗಳು
ಹೊಸದಲ್ಲ ನಮಗೆ.

ಆಸೆಕಂಗಳ ಕನಸು
ನನಸಾಗದಿರೆ ಬೇಗ
ನೊಂದುಕೊಂಡರು ಹೃದಯ
ಇಲ್ಲ ಉಪಯೋಗ.

ನಾವಂದುಕೊಂಡಂತೆ
ನಡೆವುದಿಲ್ಲ ಇಲ್ಲಿ
ಮುದುರಿಹೋದರೆ ನಾವು
ಜಾಗವಿಲ್ಲ ಜಗದಲ್ಲಿ.

ಹೊಸ ಆಸೆ, ಹೊಸ ಕನಸು
ಇರಲಿ ನಮ್ಮೊಡನೆ
ಮತ್ತೆ ಮುನ್ನಡೆಯುವ
ನನಸಾಗಿಸುವೆಡೆಗೆ.