Saturday, November 17, 2012

ಇಬ್ಬರಿಂದ ಮೂವರು ......

ಇಬ್ಬರಿದ್ದ ನಾವು ಮೂವರಾಗಿ ನೂರು ದಿನ ಕಳೆದಿದೆ. ಮೊದಲಿನ ದಿನಗಳಿಗೂ ಈಗಿನ ದಿನಗಳಿಗೂ ಬಹಳ ವ್ಯತ್ಯಾಸ ಕಾಣುತ್ತಿದೆ!

ಮೊದಲಾದರೆ ನಮ್ಮ ಇಷ್ಟದ ಹಾಗೆ ಊಟ- ತಿಂಡಿ, ಹರಟೆ, ತಿರುಗಾಟ. ಈಗ ಎಲ್ಲವೂ ಬದಲಾಗಿದೆ. ಟಿವಿ,ಇಂಟರ್ನೆಟ್ ನೋಡದ ದಿನಗಳೇ ಹೆಚ್ಚಾಗುತ್ತಿವೆ. ಮೊದಲಾದರೆ ಹೆಂಡತಿ ಹೇಳಿದರೂ ಕೇಳದೆ ಪೇಪರ್ ಓದುತ್ತಿದ್ದೆ. ಈಗ ಮಗರಾಯ ಬಂದ ಮೇಲೆ ಎಲ್ಲಾ ಬಂದ್.
ನಮ್ಮೊಳಗೇ ಜಗಳವಾಡಲು ಬೇಕಾದಷ್ಟು ಸಮಯವಿತ್ತು.ಈಗ ಮಗನ ಜೊತೆ ಕಾಲ ಕಳೆಯುವುದೇ ಕೆಲಸ.

ಯಾವತ್ತೂ ಹಾಡದ ನಾನೂ ಈಗ ಹಾಡಲು ಕಲಿತಿದ್ದೇನೆ! ಕಥೆ ಹೇಳಲು ಬಾರದ ನಾನೂ ಈಗ ಕಥೆ ಹೇಳಲು ಕಲಿಯುತ್ತಿದ್ದೇನೆ. ಮಗ ಮಾತು ಕಲಿತ ಮೇಲೆ ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ಯಾವ ಯಾವ ವೆಬ್ ಸೈಟ್ ನೋಡಬೇಕು ಅಂತ ಯೋಚಿಸುತ್ತಿದ್ದೇನೆ. ಆನ್ ಲೈನ್ ಸಿಗಬಹುದಾದ ಪುಸ್ತಕಗಳನ್ನು ಗಮನಿಸುತ್ತಿದ್ದೇನೆ.

ಒಟ್ಟಾರೆ ಜೀವನ ಶೈಲಿಯೇ ಬದಲಾಗುತ್ತಿದೆ ಅದೇ ಹಳೆಯ ಸ್ಟೈಲ್ ಬೇಜಾರಾಗುತ್ತಿದೆ ಅಂತ  ಅನಿಸುವ ಸಮಯದಲ್ಲೇ ಮಗ ಬಂದಿದ್ದಾನೆ. ಹೊಸತನದ ಹುಡುಕಾಟಕ್ಕೆ ನಾಂದಿ ಹಾಡಿಸಿದ  'ಸ್ಕಂದ'ನಿಗೆ ನಾನು ಆಭಾರಿ.

ಈ ಎಲ್ಲದರ ನಡುವೆ ಹೆಂಡತಿಯದ್ದು ಮಾತ್ರ ಕಂಪ್ಲೇಂಟ್: 'ನನಗೆ ಸಮಯ ಕಡಿಮೆ ಕೊಡುತ್ತಿದ್ದಿಯ' ಅಂತ. ಇದಕ್ಕೆ ಉತ್ತರ ಸದ್ಯಕ್ಕಿಲ್ಲ!

Thursday, June 28, 2012

Life is fulfilled

parents who always added comfort
are  relaxed because of you

when friendly hearts added up
grown and enlightened by you

when liked one could be touched
loved and living lifetime with  you

when you can complete the
commitment of one who believed

when you have desires which are
in limit of deserves

when dream kid comes to world
treasures  at  heart and home

                                       --Tejaswini

Wednesday, June 27, 2012

ಬದುಕು

ಬದುಕು ಸಾರ್ಥಕ-----------------
ನಮ್ಮ ಗೆಲುವುಗಳನ್ನ  ತಮ್ಮ ಸುಖವೆಂಬ
ಜನನಿ ಜನಕರ ಮನಕೆ ನೆಮ್ಮದಿ ಇತ್ತರೆ

ಆಟ ಪಾಟ ಎಂದು ಜೊತೆಯಾಗೊ ಸ್ನೇಹಕ್ಕೆ
ಸವಿ ಸೇರಿಸಿ ಬೆಳೆಸುವಂತಾದರೆ

ನಿಜ ಪ್ರೀತಿ ನೀಡಿದವರಿಗೆ
ಒಲುಮೆ ನಲುಮೆ ಹರಿಸುವಂತಾದರೆ

ಭರವಸೆ ಇಟ್ಟವರ ಬಯಕೆ
ತೀರಿಸುವಂತಾದರೆ

ಕೈಗೆ ಎಟುಕುವ ಆಸೆಗಳೇ
ನಮ್ಮ ಬಯಕೆಗಳಾದರೆ

ಮೆಚ್ಚಿದ ಮನದ ಕದ ತಟ್ಟಿ
ಬದುಕು ಪೂರ್ತಿ ಜೊತೆಯಾದರೆ

ಕಂಡ ಕನಸಿನ ಕೂಸು
ಮನ ತುಂಬಾ ಮನೆ ತುಂಬಾ
ಓಡಾಡಿದರೆ

ಬದುಕು ಸಾರ್ಥಕ
  --ತೇಜಸ್ವಿನಿ

Friday, January 27, 2012

ನೋವು

ಹೋಗಬೇಡ ನನ್ನ ಬಿಟ್ಟು
ನನ್ನಾಕೆಯ ದೂರು
ಮನ ತುಂಬ ದುಗುಡ
ಕೆನ್ನೆ ಮೇಲೆ ಕಣ್ಣೀರು.

ಎಲ್ಲ ಕಡೆ ನನ್ನ ನೆನಪು
ಕೆಲಸದಲ್ಲಿ ಮರೆವು
ಬೇಗ ನಾನು ಬರಲಿ ಎಂದು
ಮನದ ಒಳಗೆ ಕಾತುರ

ಮಾತನಾಡುವಾಗ ದಿನವು
ಮನವಾಗುವುದು ಮುದ್ದೆ
ತನಗೆ ತಿಳಿಯದಂತೆ ಏಕೋ
ಕಣ್ಣೆಲ್ಲ ಒದ್ದೆ-ಒದ್ದೆ.