ಕೇಂದ್ರದಲ್ಲಿ ಹೊಸ ಸರಕಾರ-ಮಂತ್ರಿಮಂಡಲ ರಚನೆಯಾಗಿದೆ.ಮುಂದಿನ ಐದು ವರ್ಷಗಳಿಗೆ ನೆಮ್ಮದಿಯಾಗಿರುವಂತಹ ಕೆಲಸಗಳನ್ನು ಮಾಡಲಿ ಎಂಬುದು ಜನಸಾಮಾನ್ಯರ ಹಾರೈಕೆ.ಹೊಸ ಸರಕಾರಕ್ಕೆ ಮತ್ತು ಮಂತ್ರಿಗಳಿಗೆ ನಮ್ಮ ಮನವಿ:
ಅಧಿಕಾರದಲ್ಲಿದ್ದಾಗ
ಭ್ರಷ್ಟಾಚಾರ
ಮಾಡಿಕೊಳ್ಳಬೇಡಿ
ಆರಿಸಿದ ಜನರಿಗೆ
ಮೋಸ ಮಾಡಿ-
ಕೊಲ್ಲಬೇಡಿ.
ಅಧಿಕಾರ ಎಂದರೆ,ಚುನಾವಣೆಯಲ್ಲಿ ಖರ್ಚುಮಾಡಿದ ಹಣವನ್ನು ವಾಪಸ್ ಸಂಪಾದಿಸಲು ಇರುವ ಅವಕಾಶ ಅಂತ ಭಾವಿಸಿದರೆ ಅದು ಅಕ್ಷಮ್ಯ. ನೀವೇ ದೇವರೆಂದು ಮತದಾರರ ಮುಂದೆ ನಾನಾ ಬಣ್ಣದ ಮಾತುಗಳನ್ನಾಡಿ ಆಮೇಲೆ ಕೈಕೊಡುವುದು ಒಳ್ಳೆಯದಲ್ಲ.ಅವಕಾಶವಾದಿ ಪ್ರೇಮಿಯಂತೆ ಆಗಬಾರದಲ್ಲ?
ಮೊದಲು
'ನೀನೆ ಸರ್ವಸ್ವ'
ಎಂದ ನಲ್ಲ
ಶ್ರೀಮಂತೆ ಒಬ್ಬಳು
ಸಿಕ್ಕಿದಾಗ
'ನೀನ್ಯಾರೋ ಗೊತ್ತಿಲ್ಲ '
ಎಂದನಲ್ಲ!
ಲೋಕಾಯುಕ್ತರ ದಾಳಿಯಾದಾಗ ಜನಸಾಮಾನ್ಯರಿಗೆ ಒಮ್ಮೆ ಖುಷಿಯಾಯಿತು. ಆದರು ಮನದೊಳಗೆ ಪ್ರಶ್ನೆ ಬಂದದ್ದು ಹೀಗೆ:
ಸಿಕ್ಕಿಬಿದ್ದವರಿಷ್ಟೇ;
ಉಳಿದವರು ಎಷ್ಟೋ?
ಬಯಲಾದ ಅಕ್ರಮ
ಕೆಲವೇ ಕೋಟಿಗಳಂತೆ
ತಿಳಿಯದಿರುವುದು
ಇನ್ನೆಷ್ಟು ಕಂತೆ?
ದಿಲ್ಲಿಯಿಂದ ಹಳ್ಳಿ ಬಹುದೂರ ದಾರಿ
ಮಧ್ಯದಲ್ಲಿಯೇ ಹಣ ಹೋಗುವುದು ಸೋರಿ
ಹಾದಿಯಲ್ಲಿಯ ಸೋರಿಕೆಯ ತಡೆಯಬೇಕು
ಇರುವ ಸಂಪತ್ತುಗಳೇ ನಮಗೆ ಸಾಕು.
2 comments:
ಚೆನ್ನಾಗಿವೆ..ಬರಿತಾ ಇರಿ..ಬರುತ್ತಾ ಇರ್ತೇವೆ..
All The Best, Buddy!
Continue The Good Work! Will surely take some time out, to relax in your Blog!
Post a Comment